ಕೆರೆಯ ನೀರು ಹರಿದಂತೆ...

ಜೀಪಿನ ಹಿಂದಿನ ಸೀಟೇ ಸರಿ ಅಂತಾ "ನೀನು ಮುಂದೆ ಬಾರಮ್ಮ" ಅಂತಾ ಬಿಂದು ಮೇಡಮ್ ಗೆ ಹೇಳಿದ್ದಕ್ಕೆ, ಸೀದಾ ಹೋಗಿ ಡ್ರೈವರ್ ಸೀಟ್ನಲ್ಲಿ ಸ್ಟೇರಿಂಗ್ ಹಿಡ್ಕೊಂಡ್ ಕುಳಿತು ಬಿಡೋದಾ ಪಾರ್ಟಿ...!! ಶಿವಾ.. ನೀನೇ ಕಾಪಾಡಪ್ಪಾ ಅಂತಾ ಸೈಲೆಂಟ್ ಆಗಿ ಬಂದು ದಿಂಬು ಸರಿ ಮಾಡ್ಕೊಂಡು ಹಿಂದಿನ ಸೀಟಿನಲ್ಲಿ ಕಾಲು ಚಾಚಿದೆ. ಅಲ್ಲೇ ಇದ್ದ ದಿಂಬಿನ ಮೇಲೆ ತಲೆಯನ್ನು ಅನಿಸುತ್ತಿದ್ದ ಹಾಗೇ... ಹಾಯ್ ಅನ್ನಿಸ್ತು. "ಗಗನವೇ ಬಾಗಿ...ಭುವಿಯನು..ಸೇರಿದಾ ಹಾಗೆ.. ಕಡಲು ಕರೆದಂತೆ.." ಅಂತಾ ಹಾಡು ಬರ್ತಾ ಇತ್ತು... "ಎಲ್ಲಿದ್ದೀನಿ ಈಗ...? ಸಧ್ಯಕ್ಕೆ ಈ ಜೀಪಿನಲ್ಲಿ ಹೋಗ್ತಾ ಇರೋದು ಎಲ್ಲಿಗೆ?" ಅನ್ನೋ ವಾಸ್ತವದ ಅರಿವು ಆಗ್ತಾ ಇದ್ದ ಹಾಗೆ, ಹಳೆಯ ನೆನಪಿನ ಪುಸ್ತಕದ ಹಾಳೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಯಿತು.. ಹಾಗೇ ಕಣ್ಣು ಮುಚ್ಚಿ ಅವುಗಳನ್ನು ಮನದಲ್ಲೇ ಮೆಲುಕು ಹಾಕುತ್ತಾ ಹೋದೆ..

ಈಗ ಸರಿ ಸುಮಾರು ೨೨ ವರ್ಷಗಳ ಹಿಂದಿನ ಪ್ರಸಂಗ. ಬಿಡದಿ ಹಾಗು ಅಲ್ಲಿಯ ನನ್ನ ಪ್ರೈಮರಿ ಸ್ಕೂಲಿನ ದಿನಗಳು. ಅಲ್ಲಿನ ಪುಡಿ ರಾಜಕಾರಣಿಗಳು, ಕೆಲಸ ಇಲ್ಲದೇ ಇರೋರು, ಬಿಸಿನೆಸ್ ಮಾಡೋ ಅಂಗಡಿ ಓನರ್ ಗಳು ಎಲ್ಲಾ ಸೇರಿ ಒಂದು ಕಡೆ ಗಣೇಶನ್ನ ಇಡ್ತಾ ಇದ್ರು. ಇಡೀ ಊರಿಗೆ ಒಂದೇ ಗಣೇಶ ಆಗ. ಸಣ್ಣ ಊರು, ಯಾರೇ ಎದುರಿಗೆ ಸಿಕ್ಕಿದರೂ, ಇವರು ಇಂಥಾವರು ಅಂತಾ ಹೇಳಬಹುದಾಗಿತ್ತು. ಹೊಸಬರು ಕಂಡರೂನು, ಇಂಥಾವರ ಮನೇಗೆ ಬಂದಿರೊವರು ಅಂತಾ ಪಕ್ಕಾ ಖಬರ್ ಎಲ್ಲರಿಗೂ ಇರೋದು. ಅಂಥಾ ಒಂದು ಶನಿವಾರ, ಊರ ಗಣೇಶನ್ನ ಬಿಡೋ ಸಂದರ್ಭ. ಭಾರೀ ಮೆರವಣಿಗೆ...ಊರು ತುಂಬಾ ಸಡಗರ.

"ಬಸವಣ್ಣನ ಗುಡಿ ಕಡೆ ಇಂದಾ.. ಅಂಗಡಿ ಬೀದಿ ಆಸಿ... ಕೆಳ್ಗಡೆಗಂಟಾ ಓಗಿ, ಇಂದಿರಾನಗರದಲ್ಲಿ ಎಲ್ಲಾ ಬೀದಿಗು ಓಗಲ್ಲವಂತೆ.. ಅಂಗೇ ತಿಮ್ಮಪ್ಪನ ಕೆರೆ ಬಗುಲನಾಗೆ ಬಂದು...ಇಂದ್ಲು ಬೀದಿ ಕಡೆ ಆಸಿ ಈ ಕಡೆ ಬತ್ತಾದಂತೆ. ಆಮೇಲೆ ಸಿಲ್ಕ್ ಫ಼ಾರಂ ಬಳುಸ್ಕೊಂಡು.. "ಕೆರೆ" ಗಂಟಾ ಓಗಿ.. ಬಿಡೋದು...".. ಹಾಲು ಹಾಕೋ ಬೋರಮ್ಮ ಪೂರ್ತಿ ಮೆರವಣಿಗೆ schedule ನ ಬೆಳಗ್ಗೇನೆ ಅಮ್ಮನ ಹತ್ತಿರ ಒಪ್ಪಿಸ್ತಾ ಇದ್ಲು.

ಕೆರೆ!! ನೆಲ್ಲಿಗುಡ್ಡೆ ಕೆರೆ!! ಕಿವಿ ಚುರುಕಾಗಿ ನಿಂತುಕೊಂಡವು. ನೆಲ್ಲಿಗುಡ್ಡೆ ಕೆರೆ. ಇದರ ಬಗ್ಗೆ ಸ್ವಲ್ಪ ಹೇಳಿಬಿಡುತ್ತೀನಿ. ಬಿಡದಿಯಿಂದ ಮಾಗಡಿ ಕಡೆಗೆ ಒಂದು ಸಣ್ಣ ರಸ್ತೆ ಹೋಗುತ್ತೆ. ದಾರಿಯಲ್ಲಿ ಮಂಚನಬೆಲೆ, ಸಾವನದುರ್ಗ ಇವೆಲ್ಲಾ ಸಿಗುತ್ತವೆ. ೧.೬ ಕಿಲೋಮೀಟರ್ ಕ್ರಮಿಸಿದರೆ, ನಿಮ್ಮ ಕಣ್ಣ ಎದುರಿಗೇನೆ ನೆಲ್ಲಿಗುಡ್ಡೆ. ವಿಶಾಲವಾಗಿ ಚಾಚಿಕೊಂಡಿರೋ ಕೆರೆ. ಸುತ್ತ ಮುತ್ತ ಹಳ್ಳಿಗಳಿಗೆ ಕೃಷಿ ಹಾಗೂ ನೀರಾವರಿಯ ಮೂಲ. ಒಂದು ಮಾನವ ಚಾಲಿತ ಬಾಗಿಲು ಇರೋ ಕಾಲುವೆ (channel) ಇದೆ. ಇದರಲ್ಲಿ ಬಿಡೋ ನೀರನ್ನ ಸುತ್ತ ಮುತ್ತಲಿನ ರೈತರು ಕೃಷಿ ಭೂಮಿಗಳಲ್ಲಿ ಬಳಸಿಕೊಳ್ತಾರೆ. ನೀರು ಬತ್ತೋದಕ್ಕೆ ಆಸ್ಪದನೇ ಇಲ್ಲ. ಅಷ್ಟು ದೊಡ್ಡ ಸಮೃದ್ಧ ಕೆರೆ. ಇದರ ನಡುವಲ್ಲಿ ತೆಂಗಿನ ಮರಗಳೆಲ್ಲಾ ಮುಳುಗಿವೆ. ಅವುಗಳ ಬೋಳು ತಲೆಗಳನ್ನು ಬೇಸಿಗೆ ಸಮಯ ನೀರು ಕಮ್ಮಿ ಆದಾಗ ನೋಡಬಹುದು. ಮಳೆಗಾಲದಲ್ಲಿ ಕೋಡಿ ಹೊಡೆಯೋದು ಸಾಮಾನ್ಯ. ೪ ಅಥವ ೫ ವರ್ಷ ಕೋಡಿ ಆಗದೆ ಇದ್ದಿದ್ದನ್ನೂ ನೋಡಿದ್ದೇನೆ. ಕೋಡಿ ಆದರೆ, ಸುತ್ತ ಮುತ್ತಲಿನ ರೈತರು ಈ ಬಾರಿ ಒಳ್ಳೇ ಮಳೆ ಅಂತಾ ಖುಷಿ ಪಡುತ್ತಾರೆ. ಆಗಿನ ಕಾಲದ SSLC Results ದಿನಗಳಲ್ಲಿ ಇಲ್ಲಿ ಪೊಲೀಸರ ಗಸ್ತು ಸಾಮಾನ್ಯ ದೃಶ್ಯ ಆಗಿರುತ್ತಾ ಇತ್ತು. ಯುವ ಜನರಿಗೆ ಪರೀಕ್ಷೆಯಲ್ಲಿ ಫ಼ೇಲ್ ಆದಾಗ, ಮನೇಲಿ ಬೈದಾಗ, ಪ್ರೇಮಿಗಳಿಗೆ ತಲೆ ಕೆಟ್ಟಾಗ ಆರಾಮಾಗಿ ಬಂದು ಮನಸೋ ಇಚ್ಛೆ ನೀರಲ್ಲಿ ಬಿದ್ದು ಸಾಯೋಕೆ ಹೇಳಿ ಮಾಡಿಸಿದ ಜಾಗ. ಯಾರಾದರೂ ಬಿಡದೀಲಿ, ಮನೆ ಬಿಟ್ಟು ಹೋದರು ಅಂದರೆ, ಈಗಲೂ ಕೆರೆ ಹತ್ತಿರಾನೆ ಮೊದಲು ಹೋಗಿ ಹುಡುಕೋದು.

ವರ್ಷದ ಯಾವುದೋ ಒಂದು ಕಾಲದಲ್ಲಿ ವಿದೇಶದ ವಲಸೆ ಹಕ್ಕಿಗಳೂ ಬಂದು ಕಾಣಿಸುತ್ತವೆ ಅಂತಾ ಓದಿದ್ದೆ. ಸ್ವತಃ Bird watching expert ಆದರೂನೂ, ಇಲ್ಲಿಯವರೆಗೂ ಇದನ್ನ ಗಮನಿಸಕ್ಕೆ ಆಗಿಲ್ಲ ;-). ಕೆರೆ ಪಕ್ಕದಲ್ಲೇ ಮೀನು ಸಾಕಣೆ ಕೇಂದ್ರ ಅಂತಾ ರಾಜ್ಯ ಸರ್ಕಾರ ತೊಟ್ಟಿಗಳನ್ನು ಮಾಡಿವೆ. ಹೊಸ ವರ್ಷದ ದಿನ ಆಗಿನ ಕಾಲಕ್ಕೆ, ಪಡ್ಡೆ ಹುಡುಗರಿಗೆ ಎಣ್ಣೆ ಹೊಡೆಯೋಕೆ ಅತ್ಯಂತ ಪ್ರಶಸ್ತವಾದ ಸ್ಥಳ.

ನನಗೆ personal ಆಗಿ ನೆಲ್ಲಿಗುಡ್ಡೆ ಕೆರೆಯ ವಾತಾವರಣ ಅಲ್ಲಿನ ನೀರವತೆ, ಸೂರ್ಯಾಸ್ತದ ಸಮಯ ದೂರದಲ್ಲಿ ಕಾಣೋ ಸಾವನದುರ್ಗದ ವಿಹಂಗಮ ನೋಟ ಇವೆಲ್ಲಾ ಇಷ್ಟ. ನಮ್ಮ ಮನೆಗೆ ಯಾರೇ ಅತಿಥಿಗಳು ಬಂದರೂ, ಇಲ್ಲಿಗೆ ಒಂದು walk ಇದ್ದೇ ಇರ್ತಾ ಇತ್ತು. ಕಾರ್ ತಗೊಂಡರೆ ಇದರ backdrop nalle ನೇ ಅದರ ಫೋಟೋ ತೆಗೀಬೇಕು ಅಂತಾ ಒಂದು ಮಹದಾಸೆ ಬೇರೆ!! ಬಿಡದಿ ಬಿಟ್ಟ ನಂತರ ಈಗಲೂ ಆ ಕಡೆ ಹೋದಾಗೆಲ್ಲಾ ಕೆರೆಗೆ ಒಂದು ಭೇಟಿ ಗ್ಯಾರಂಟಿ. ಕೆರೆ ಪ್ರವರ ಇಷ್ಟು ಸಾಕು ಅನ್ನಿಸುತ್ತೆ!

ಸರಿ. ವಿಷಯಕ್ಕೆ ಬರೋಣ. ಈ ಸಲ ಅದೇನಾದ್ರು ಆಗಲಿ ಕೆರೆವರೆಗೂ ಹೋಗಿ ಗಣೇಶನ್ನ ಬಿಡೋ ಪೂರ್ತಿ ಕಾರ್ಯಕ್ರಮ ನೋಡ್ಕೊಂಡೇ ಬರಬೇಕು ಅಂತಾ.. ಆಚೆ ಗೋಲಿ ಆಡ್ಕೊಂಡ್ ಬರೋ ನೆಪದಲ್ಲಿ ಹೋಗಿ ನಂದೀಶನ್ನ ತಯಾರಾಗಿಸಿ ಬಂದಿದ್ದು ಆಗಿತ್ತು. According to Boramma's exact schedule, ಹೊಂಬಯ್ಯನವರ tractor ಮೇಲೆ ಕೂತ್ಕೊಂಡು ಗಣೇಶ ನಮ್ಮನೆ ಮುಂದೇನೂ ಬಂದೇ ಬಿಟ್ಟ. ಆ ಸಲ ದೇವರ ಹೊಸಳ್ಳಿಯಿಂದ ನಂದಿ ಕೋಲು ಹಾಗೂ ದೇವರು ಕುಣಿಸೋರನ್ನ ಕರೆಸಿದ್ದು ವಿಶೇಷ ಆಗಿತ್ತು. ಅಮ್ಮ ಗಣಪತಿಗೆ ಕಾಯಿ ಒಡೆಸಿ, ಪೂಜೆ ಮಾಡಿಸಿದಳು. "ಇಲ್ಲೇ ನಂದೀಶನ ಮನೆವರೆಗೂ ಮೆರವಣಿಗೆ ಜೊತೇನೆ ಹೋಗಿ, ಆಮೇಲೆ ಸ್ಕೂಲ್ ಹತ್ರ ಆಟ ಆಡ್ಕೊಂಡ್ ಬರ್ತೀನಮ್ಮ" ಅಂತಾ ಹೇಳಿ, escape ಆಗಿದ್ದೆ.

ಶ್ರೀ ಶ್ರೀ ವಿದ್ಯಾ ಗಣಪತೀಕ್ಕಿ...ಜೈ... ಡಂಕಣಕನ್... ಡಂಕಣಕನ್... ತಮಟೆ.. ಢಾಂ ಢೀಂ.. ಈರುಳ್ಳಿ ಬಾಂಬ್! ವಾಹ್! ಏನ್ ವೈಭವ!

ಕೆರೆ ಹತ್ತಿರ ಮೆರವಣಿಗೆ ಅಂತ್ಯವಾಗಿ, ಇದ್ದ ಘಟಾನುಘಟಿಗಳೆಲ್ಲಾ ಸೇರಿ, ಗಣೇಶನ್ನ ಎತ್ತಿಕೊಂಡು, ನಾನು ಆ ಕೆರೇಲಿ ಈಜಲಿಕ್ಕೆ ನನ್ನ ಮಿತಿ ಅಂತಾ ಯಾವ ಜಾಗನಾ ಗುರುತು ಇಟ್ಟುಕೊಂಡಿದ್ದೆನೋ ಅಲ್ಲಿಗಿಂತಾ ತುಸು ಮುಂದೇನೆ ಹೋಗಿ ಮುಳುಗಿಸಿದ್ದನ್ನ ಕಣ್ಣು ತುಂಬಾ ನೋಡಿದ್ದು ಆಯಿತು. ಎಲ್ಲರೂ ಪ್ರಸಾದ ತಗೊಂಡೇ ಹೋಗಬೇಕು ಅಂದಾಗ, ನಮ್ಮ ಕ್ಲಾಸಿನ ದೈತ್ಯ ಗಾತ್ರದ ಗೆಳೆಯ 'ತೇಜ'ನೇ ಎಲ್ಲರಿಗು ಮುತ್ತುಕದ ಎಲೆ ಕೊಡ್ತಾ ಇದ್ದ. ನನ್ನ ಹತ್ತಿರನೂ ಬಂದು..."ಓ! ತಗೋ ಮಗಾ..ಈ ಸಲ ಇಲ್ಲಿವರೆಗೂ ಬಂದಿದೀಯ! ಪರವಾಗಿಲ್ಲ...! ಏಯ್ ಇಲ್ಲಿ ಪೊಂಗಲ್ ಹಾಕೋ" ಅಂತಾ ಕೂಗಿ ಮುಂದೆ ಹೋದ. ಅಲ್ಲೇ ಕಲ್ಲು ಬೆಂಚಿನ ಹತ್ತಿರ ನಂದೀಶನ ಜೊತೆ ಕೂತು, ಸೀ ಪೊಂಗಲ್ ಹಾಗೂ ವಿಪರೀತ ಈರುಳ್ಳಿ ಬೆಳ್ಳುಳ್ಳಿ ಹಾಕಿದ ಚಿತ್ರಾನ್ನ ತಿಂದಿದ್ದೂ ಆಯಿತು.

Next Mission?? ನಂದೀಶನ ಮುಖ ನೋಡಿ ಹಂಗೇ ಕಣ್ಣ ಸನ್ನೆಯಲ್ಲೇ Enter the dragon ಅಂತಾ ನೀರಿಗೆ ಇಳಿದಿದ್ದೇ!! ಆಗ ತಾನೇ ಕೋಡಿ ಇಂದಾ ಹರಿವು ನಿಂತು, ತುಳುಕುತ್ತಾ ಇದ್ದ ನೀರಿನಲ್ಲಿ ಅಲ್ಲೇ ಒಂದೆರಡು ಸುತ್ತು ಈಜು ಹೊಡೆದ್ವಿ. ಈಜು ಬೇಜಾರಾಗಿ ದಡಕ್ಕೆ ಬಂದಮೇಲೆ.. ಹಾಕಿದ್ದ ಟೀ ಶರ್ಟನ್ನೇ, ಸೊಂಟಕ್ಕೆ ಕಟ್ಟಿಕೊಂಡು ಒಳ ಚಡ್ಡಿ ನೆನೆಸಿ, ಹಿಂಡಿ ಕೊಡವಿ...ಎಲ್ಲ ನೀರು ಹೋಯ್ತು ಅಂತಾ ಹಂಗೇ ಮತ್ತೆ ಅದನ್ನೇ ಏರಿಸಿಕೊಂಡಿದ್ದೂ ಆಯಿತು. ನಮ್ಮ ನಂದೀಶನದು ಒಂಥರಾ ಹುಚ್ಚು ಸಾಹಸಗಳೇ ಯಾವಾಗಲೂ. "ಲೇ ಶರತಾ... ಕೋಡಿ ದಾಟಿಕೊಂಡು ಆ ಕಡೆ ಹೋಗ್ ಬರೋಣ ಬಾರೋ" ಅಂತಾ ಅಲ್ಲೇ ನೀರಿನ ಪಕ್ಕಾನೇ ಕಲ್ಲು ಬಂಡೆಗಳ ಮೇಲೆ ಹಾರುತ್ತಾ ಆ ಕಡೆ ಇಬ್ಬರೂ ಹೋಗಿ ನಿಂತಾಗ ಏನೋ ಸಾಧಿಸಿದ್ವಿ ಅನ್ನೋ ಸಾಧನಾಭಾವ! ನಾಳೇ ಸ್ಕೂಲ್ ನಲ್ಲಿ ಗುಂಡ, ಸೇಠು, ಸಂದೀಪಂಗೆ ಹೇಳಕ್ಕೆ ಒಂದು ಸರಕು ಸಿಕ್ಕಿತು ಅನ್ನೋ ಖುಷಿಯಿಂದಾ ತಿರುಗಿ ಈ ಕಡೆ ದಡಕ್ಕೆ ಬಂದ್ವಿ. ಬರೋವಾಗಾ ನಂದೀಶ ಕೂಗಿದ. "ಲೇ ಅಲ್ಲಿ ನೋಡೋ ಲೋಕೇಶನ ಅಣ್ಣ ಗಾಡಿ ಹೊಡೀತಾ ಇದಾನೆ.. ಊರ್ ಕಡೇಗೇನೆ ಅನಿಸುತ್ತೆ.. ನಡೀ ಓಡಣಾ" ಇಬ್ರೂ ಎದ್ದೂ ಬಿದ್ದೂ ಓಡಿ, ಆ ಎತ್ತಿನ ಟೈರ್ ಗಾಡಿನಾ running ನಲ್ಲೇ ಹತ್ತಿ ನಿಂತಾಗ ಆಗಿದ್ದ ಸಂತೋಷ ಹೇಳತೀರದು. ನಡೆಯೋದು ತಪ್ಪಿತು ಅನ್ನೋ ಖುಷಿ ಒಂದು ಕಡೆ, ನಾಳೆ ಸ್ಕೂಲ್ ನಲ್ಲಿ ಹೇಳಕ್ಕೆ ಇನ್ನೊಂದು material ready! ವಾಹ್!

ಯಥಾಪ್ರಕಾರ ದೈವಿಕ್ ಮನೇಲಿ ಶನಿವಾರದ tv ಸಿನೆಮಾ ನೋಡಿ ಮನೆಗೆ ಬಂದು ಮಲಗಿದ್ದೆ (ಮನೇಲಿ tv ತರೋದು ಗಗನ ಕುಸುಮವಾಗಿತ್ತು ಆಗ). ಮುಂಜಾನೆ ಸೈಕಲ್ ಬೆಲ್ ಶಬ್ದ ಕೇಳಿದಾಗ ರಾತ್ರಿ ಕನಸಲ್ಲೇ ಬೆಲ್ ಹೊಡೆದಂತಾಯಿತು. ಆಚೆ ಅಮ್ಮ ಪಾತ್ರೆ ತಗೊಂಡ್ ಹೋದ್ರು. ಶಿವಲಿಂಗಯ್ಯ ಹಾಲು ಹಾಕ್ತಾ "ಏನ್ ಅಮ್ಮಾವ್ರೆ.. ಮಗನ್ನ ಅಲ್ಲಿಗಂಟಾ ಯಾಕೆ ಬುಡ್ತೀರಿ?"

"ಎಲ್ಲಿಗೆ ಶಿವಲಿಂಗಯ್ಯ?"

"ಅಯ್ಯೋ ಏನ್ರವ್ವಾ ನಿಮ್ ಮಗ 'ಸರತ್ತು'ನೂ, ಆರ್.ಜಿ.ಎಸ್ ಮೇಷ್ಟ್ರು ಮಗಾನೂ, ನೆನ್ನೆ ಕೆರೆಗಂಟಾ ಗಣೇಶನ ಮೆರವಣಿಗೆ ಜೊತೆನೇ ಬಂದು, ಅಲ್ಲಿ ಪೂರ್ತಾ ಬಿಡೋಗಂಟಾ ಇದ್ದು, ಈಜು ಗೀಜು ಎಲ್ಲಾ ಒಡ್ಕೊಂಡು...ಏನ್ ಅವತಾರಾ ಅಂತೀರಿ ಇಬ್ರುದೂ! ನಾನು ಕೂಗ್ಕಂಡೆ ಒಂದ್ ಸಲ....ಕೇಳ್ಬೇಕಲ್ಲ ಉಡುಗ್ ಮಕ್ಳುಗೆ! ಕೋಡಿ ಒಡದಿರೋ ಕೆರೆ... ಏನಾರ ಎಚ್ಚು ಕಮ್ಮಿ ಆದ್ರೆ ಏನ್ ಕತೆ ಅಂತಾ! ಉಸಾರಮ್ಮ...ನೋಡ್ಕಳಿ!"

ಇಷ್ಟು ದಿನ ಬರೀ ನೀರು ಮಿಶ್ರಿತ ಹಾಲು ಕೊಡ್ತಾ ಇದ್ದ ಶಿವಲಿಂಗಯ್ಯ, ಬಿಡದೀಲಿ ಇದ್ದ ನನ್ನ ದುಶ್ಮನ್ ಗಳ ಪಟ್ಟಿ ಗೆ ಹೊಸದಾಗಿ entry ಕೊಟ್ಟಿದ್ದ .

"ಕೇಳಿದ್ರಾ ನಿಮ್ ಮಗನ ಪ್ರತಾಪನಾ?!"

"ಏನ್ ಅಂತೇ" ಅಣ್ಣ ಕನ್ನಡಕ ಸರೀ ಮಾಡ್ಕೊತಾ ಕೇಳಿದರು. "ಕೆರೆ!.. ಗಣೇಶ.. ಈಜು...ಒದ್ದೆ ಒಳಚಡ್ಡಿ... ಬೆಳ್ಳುಳ್ಳಿ ಚಿತ್ರಾನ್ನ..." ಎಲ್ಲಾ 'ctrl + v' ಆಯಿತು.

"ಎದ್ದೇಳೋ ಬದ್ಮಾಶ್ ಅಂತಾ ಅಮ್ಮ ಹಲ್ಲು ಕಡಿದು ಗುಡುಗಿ... ಇನ್ನೊಂದ್ ದಿನ ಹೇಳದೇ ಕೇಳದೇ ಕಾಲು ಆಚೆ ಇಡು ಮನೆಯಿಂದಾ...ಕಾಲು ಮುರಿದು ಕೈಗೆ ಕೊಡ್ತೀನಿ rascal!!" ಅಂತಾ ಸರೀಗೆ ಎರಡು ಬಿಟ್ಟಿದ್ದಳು. ಕೆಲ ಹೊತ್ತಿನ ನಂತರ ಕುಡಿಯೋಕೆ ಹಾಲು Bournvita ಹಾಕಿ ಕೊಟ್ಟು ಹೋದಳು. ಇಲ್ಲಿ ನನಗೆ ಲೋಟದಲ್ಲಿದ್ದ ಹಾಲು ನೋಡಿದರೂ, ಅದನ್ನು ಕೊಟ್ಟು ಹೋದ ಶಿವಲಿಂಗಯ್ಯ... ವಜ್ರಮುನಿ ಫ಼ೇಸ್ resemblance ಬಂದು ಅವನ ಮೇಲಿನ ಸಿಟ್ಟು sip by sip ಏರುತ್ತಾ ಜಾಸ್ತಿ ಆಗ್ತಾ ಇತ್ತು!

"Dunkin Donuts ಇಲ್ಲೇ ಇದೆ ಕಣ್ಲಾ. ಒಂದು 60 ಕಾಪಿ ಹಾಕ್ಕೊಂಡು ಪ್ರಯಾಣ ಮುಂದುವರೆಸೋಣವೇ" ಅಂತಾ ಯಾರೋ ಬಡಬಡಿಸಿದಂತಾಯಿತು....

ಮನೇ ಇಂದಾ ಕಾಲು ಆಚೆ?...ಕೆರೆ ? ಜೈ ಅಂತಾ ಎದ್ದು ಕೂತು ವಾಸ್ತವಕ್ಕೆ ಬಂದೆ.

ಅಮ್ಮ ನೋಡದೇ ಇರೋ ಸಮುದ್ರಗಳನ್ನೇ ದಾಟಿ, ಯಾವುದೋ ದೂರ ದೇಶದಲ್ಲಿ ಹರೀತಾ ಇರೋ ನಯಾಗರ ಜಲಪಾತಕ್ಕೆ ಹೋಗೋದು ಅಂತಾ PUC ಯ ಗೆಳೆಯ ಸುಶೀಲ್ ಹಾಗು ಅವನ ಮಡದಿ ಬಿಂದು ಜೊತೆಗೂಡಿ, ಅವರ ಜೀಪಿನ ಹಿಂಭಾಗದಲ್ಲಿ ಕಣ್ಣು ಮುಚ್ಚಿ ಮಲಗಿದ್ದೆ. ಜೀಪು ನಿಂತುಕೋತು. "ಅಲ್ಲಿ ಕೋಡುಬಳೆ ಕವರ್ ಕೂಡ ಇದೇ ತಗೋ" ಅಂದಳು ಬಿಂದು ಪ್ರಿಯದರ್ಶಿನಿ ಮಹಾತಾಯಿ... ! ಸ್ವರ್ಗ..! ಅಂದುಕೊಂಡು ಕೋಡುಬಳೆ ಹಿಡ್ಕೊಂಡು ಕೆಳಗೆ ಇಳಿದು ಹೋದ್ವಿ.

ಇನ್ನೊಂದ್ ವಿಷಯ.. ಬಿಂದು ಜೀಪ್ ಓಡಿಸುತ್ತಿದ್ದಾಗ ಅವಳಿಗೆ ಇವನ american driving sessions ಗಳು..ಅವಳು ಓಡಿಸ್ತಾ ಇದ್ದ ಪರಿ!! ಇವೆಲ್ಲದರ ಮಧ್ಯೆ ನಾನಂತೂ ಜೀವ ಕೈಲಿ ಹಿಡಿದು ಕೂತಿದ್ದಂತೂ... ದೇವರಾಣೆ ನಿಜ! ಅಲ್ಲಿ ಹೇಳೋಕೆ ಧೈರ್ಯ ಬರಲಿಲ್ಲ ಅಷ್ಟೇ. ಆದರೆ ಬೆಂಗಳೂರಿನಲ್ಲಿ ಮನೆಯಿಂದ ಹೊರಡೋ ಮುಂಚೆ ಮರೆಯದೇ ಅಮ್ಮನಿಗೆ "ಹೋಗಿ ಬರ್ತೀನಮ್ಮಾ" ಅಂತಾ ಹೇಳಿ ಬಂದಿದ್ದ ಧೈರ್ಯ ಮಾತ್ರ ಇತ್ತು :)

ನನ್ನ ಮೇಲೆ ಅಪರಿಮಿತ ನಂಬಿಕೆಯಿಟ್ಟು ಕೇಳಿದ ಕಡೆಗೆಲ್ಲಾ ಯಾವುದೇ ಕಟ್ಟುಪಾಡುಗಳಿಲ್ಲದೇ, ಮುಕ್ತ ಮನಸ್ಸಿನಿಂದ, ಸ್ವಚ್ಛಂದವಾಗಿ ಹರಿಯಲು, ಹಾರಲು ಬಿಟ್ಟ ಅಮ್ಮ ಹಾಗೂ ಅಣ್ಣ (ಅಪ್ಪ) ನಿಗೆ ಅರ್ಪಿಸುತ್ತಾ...

ನಗು ನಗುತಾ ನಲಿ ನಲಿ...ಏನೇ ಆಗಲಿ..
--ಶರತ್

ವಿ. ಸೂ:ಏನ್ ಅನ್ನಿಸಿತು ಅಂತಾ ಬರೆದು ತಿಳಿಸಿ.. ಇಲ್ಲಾದರೂ ಸರಿ.. ಈಮೈಲ್ ನಲ್ಲಾದರೂ ಸರಿ.

12 comments:

Naveen said...

sooper maga

sriharsha said...

maja ide sisya,,,

ivyonthemind said...

awesome! baalyada nenapu yawattu aparimita khushi neeDatte! amma kotta boost/bournvita munde yaw internationalized coffee nu sama aagalla! Nice post! Love it.. especially 'ammana' baiguLa :)

Susheel Sandeep said...

magane next time baa..bari Niagara enu..pull east inda west coast gantaa avle odsadu.. neen hindgade seat alli jeeva idkande kootkolo scene...

Good one kanla...easy-yaagi odiskondu hoytu.

Vijayaraghavan said...

Tumba channagide.Andokonda hage sahaja vagi barididiya..Simple naration...Overall very good...

Viji said...

sooper maga... eshto sala hale saahasagalu, madura bhaavanegalu, nenapugalu barutthe, aadre adanna roopakkakke tharodhu kashta... manasinalle melle haaki nagutthivi...
good job.. nice expressions... khushi aaythu odi... :-)

Viji said...

and nice title....

$ukr!$h said...

nice one maga!... sharatha nelligudda kereli bidda niagara li yedda he he he :)

Nataraj B.C said...

ಇದನ್ನ ಓದಿ ನನಗೆ ತುಬ್ಬ ಇಷ್ಟ ಅತ್ತು ಮಗ ನಮ ಸ್ಕೂಲ್ ನ ಅ ದಿನಗಳು ನನಗೆ ಕನ್ಮುದೆ ಬoದು ಒದವೋ

Guru said...

Yenapaa sharathu..nin talent gotte irlilvallo

Ravi said...

olle tarle sharatha...really nice

Unknown said...

Nice!